ಯಶೋಗಾಥೆ

ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಗಮನ ಸೆಳೆದ ಉಪಕರಣ | ಜೀವಾಮೃತ ಮಿಶ್ರಣಕ್ಕಾಗಿ ಸೋಲಾರ್ ಯಂತ್ರ

Share

ಬೆಂಗಳೂರು ನ.19: ಸ್ಟಾರ್ಟಪ್ ಗಳ ಭರಾಟೆ, ಟೆಕ್ ಸಂತೆಯ ಮಧ್ಯೆ ಆವಿಷ್ಕಾರಿ ರೈತರೊಬ್ಬರು ಗಮನಸೆಳೆದಿದ್ದಾರೆ. ಸಾವಯವ ಕೃಷಿಗೆ ಅತ್ಯಗತ್ಯವಾಗಿರುವ ಜೀವಾಮೃತವನ್ನು ಸಮಯಕ್ಕೆ ಸರಿಯಾಗಿ ಮಿಶ್ರಣ ಮಾಡುವ ಸ್ವಯಂಚಾಲಿತ ಸೌರಚಾಲಿತ ಯಂತ್ರವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.

ಜೀವಾಮೃತ ತುಂಬಿದ ದೊಡ್ಡ ಡ್ರಮ್ಗೆ 7 ದಿನ ಕೋಲು ಹಾಕಿ ಕಲಕುವುದು ತುಸು ಶ್ರಮದಾಯಕ. ಜತೆಗೆ, 2 ದಿನ ಕಳೆದ ಕೂಡಲೇ ಅದು ವಾಸನೆ ಬರತೊಡಗುತ್ತದೆ. ಹಾಗಾಗಿ ಕೆಲಸದವರೂ ಹಿಂದೇಟು ಹಾಕುತ್ತಾರೆ, ಸಮರ್ಪಕವಾಗಿ ಮಿಶ್ರಗೊಳಿಸದೇ ಇದ್ದರೆ, ಜೀವಾಣುಗಳು ಸಮರ್ಪಕವಾಗಿ ಅಭಿವೃದ್ಧಿಗೊಳ್ಳುವುದಿಲ್ಲ.

ಕಲಬುರಗಿಯ ರೈತ ಶರಣಬಸಪ್ಪ ಪಿ.ಪಾಟೀಲ್ ಅವರು ಇದಕ್ಕೆ ಪರಿಹಾರವಾಗಿ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರವನ್ನು 200-300 ಲೀಟರ್ ಜೀವಾಮೃತ ದ್ರಾವಣ ತುಂಬಿದ ಡ್ರಮ್ಗೆ ಅದ್ದಿ ಇರಿಸಿದರಾಯಿತು. ಟೈಮರ್ ಹೊಂದಿರುವ ಸೌರ ಚಾಲಿತ ಈ ಯಂತ್ರವು ದಿನಕ್ಕೆ 3 ಬಾರಿಯಂತೆ 7 ದಿನ ಸಮಯಕ್ಕೆ ಸರಿಯಾಗಿ ಮಿಶ್ರಗೊಳಿಸುತ್ತದೆ. ಸಮಯ, ಶ್ರಮ ಎರಡೂ ಉಳಿತಾಯವಾಗುತ್ತದೆ. ಪೇಟೆಂಟ್ ನೊಂದಿಗೆ ಈ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಬೆಲೆ 7,000 ರೂ. ಇರಲಿದೆ ಎಂದು ಅವರು ವಿವರಿಸುತ್ತಾರೆ. ಪುತ್ರ ಮಲ್ಲಿಕಾರ್ಜುನ್ ವಿವರಿಸಿದರು.

ಸ್ವತಃ ರೈತರಾಗಿರುವ ಶರಣಬಸಪ್ಪ ಅವರು ಈಗಾಗಲೇ ಕೃಷಿಕರಿಗೆ ಉಪಯುಕ್ತವಾದ ವಿವಿಧ 25 ಸರಳ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ವಿಶೇಷ.


Share

You cannot copy content of this page