ಬೆಂಗಳೂರು:ಪಿಎಂ ಇ ಡ್ರೈವ್ ಯೋಜನೆಯ ಮೂಲಕ ರಾಜ್ಯದ ಇವಿ ವಾಹನೋದ್ಯಮಕ್ಕೆ ಪರಿವರ್ತನಾತ್ಮಕ ವೇಗ ದೊರೆಯುತ್ತದೆ ಎಂದು ಪ್ರತಿಪಾದಿಸಿದ ಕೇಂದ್ರ ಸಚಿವ ಹೆಚ್.ಡಿ. ಹೆಚ್.ಡಿ. ಕುಮಾರಸ್ವಾಮಿ ಅವರು; ಪಿಎಂ ಇ-ಡ್ರೈವ್ ಅಡಿಯಲ್ಲಿ ಕರ್ನಾಟಕಕ್ಕೆ 1,243 ಹೊಸ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ರಾಷ್ಟ್ರವ್ಯಾಪಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ಕುರಿತು ನಡೆದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು, ಈ ಉಪಕ್ರಮದಿಂದ ರಾಜ್ಯದ ಇವಿ ಕ್ಷೇತ್ರಕ್ಕೆ ದೊಡ್ಡ ಬೂಸ್ಟರ್ ದೊರೆಯಲಿದೆ ಎಂದರು.
ರಾಜ್ಯದಲ್ಲಿ 1,243 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಅಳವಡಿಸುವ ಈ ಯೋಜನೆಗೆ ₹123.26 ಕೋಟಿ ವೆಚ್ಚವಾಗುತ್ತಿದ್ದು, ಈ ಘೋಷಣೆಯು ಕರ್ನಾಟಕದ ಇವಿ ಚಲನಶೀಲತೆಯತ್ತ ದಾಪುಗಾಲು ಎಂದೇ ಹೇಳಲು ಬಯಸುತ್ತೇನೆ. ಅಲ್ಲದೆ ಭಾರತದ ಇವಿ ಪರಿವರ್ತನೆಗೆ ಈ ಉಪಕ್ರಮವು ಮತ್ತಷ್ಟು ವೇಗ ನೀಡುತ್ತದೆ. ರಾಜ್ಯದ ಹಸಿರು ಚಲಶೀಲತೆಗೆ ಉತ್ತೇಜನ ನೀಡುವ ದೊರೆಯುವ ಮೂಲಕ ಇಂಗಾಲ ಹೊರಸೂಸುವಿಕೆ ತಡೆಗಟ್ಟಲು ದೊಡ್ಡ ಕೊಡುಗೆ ನೀಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
ಬೆಂಗಳೂರು ಭಾರತದ ಪ್ರಮುಖ ಇವಿ ಚಾರ್ಜಿಂಗ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಈ ಸಂದರ್ಭದಲ್ಲಿ ಸಚಿವರು ಒತ್ತಿ ಹೇಳಿದರಲ್ಲದೆ, ಸ್ವಚ್ಛ ಚಲನಶೀಲತೆಯತ್ತ ರಾಷ್ಟ್ರವ್ಯಾಪಿ ಪರಿವರ್ತನೆಯನ್ನು ವೇಗಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಇತರ ರಾಜ್ಯಗಳನ್ನು ಅವರು ಮನವಿ ಮಾಡಿದರು.
ವಿವಿಧ ರಾಜ್ಯಗಳು ಮತ್ತು ಕೇಂದ್ರ ಸರಕಾರಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 4,874 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಈವರೆಗೆ ₹503.86 ಕೋಟಿ ಮೌಲ್ಯದ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ ಎಂದು ಹೇಳಿದ ಸಚಿವ ಕುಮಾರಸ್ವಾಮಿ ಅವರು; ಅನುಮೋದಿತ ಪ್ರಸ್ತಾವನೆಗಳಲ್ಲಿ HPCL, IOCL ಮತ್ತು BPCL ನಂತಹ ಪ್ರಮುಖ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಾ ಸಂಸ್ಥೆಗಳು (CPSE), ರಾಜಸ್ಥಾನ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಕೂಡ ಒಳಗೊಂಡಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಹಸಿರು ಸಾರಿಗೆಯಲ್ಲಿ ದೊಡ್ಡ ಮೈಲುಗಲ್ಲುಗಳನ್ನು ಸಾಧಿಸುತ್ತಿದ್ದೇವೆ. 2070 ರ ವೇಳೆಗೆ ಇಂಗಾಲದ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ದೃಢವಾಗಿ ಬದ್ಧರಾಗಿದ್ದೇವೆ. ಅಲ್ಲದೆ, 2047ರ ವೇಳೆಗೆ ವಿಕಸಿತ ಭಾರತ ಸಾಧನೆಯದೃಷ್ಟಿಕೋನಕ್ಕೆ ಅನುಗುಣವಾಗಿ ಮುನ್ನಡೆಯುತ್ತಿದ್ದೇವೆ ಎಂದು ಅವರು ಹೇಳಿದರು. ಸುಸ್ಥಿರತೆ, ನಾವೀನ್ಯತೆ ಮತ್ತು ಪ್ರಮಾಣೀಕೃತ ಸಾಧನೆಗೆ ಪ್ರಧಾನಿಗಳು ಒತ್ತು ನೀಡುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಭಾರತದ ಆಟೋಮೋಟಿವ್ ವಲಯವು ದೇಶದ ಒಟ್ಟು ಜಿಡಿಪಿಗೆ 7%ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಉತ್ಪಾದನಾ ಜಿಡಿಪಿಯ ಸುಮಾರು ಅರ್ಧದಷ್ಟಿದೆ ಮತ್ತು ಸುಮಾರು 30 ದಶಲಕ್ಷದಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ, ಇದು ಭಾರತದ ಬೆಳವಣಿಗೆ ದೃಷ್ಟಿಯಲ್ಲಿ ಗುರುತರವಾದ ಹೆಗ್ಗುರುತು ಎಂದು ಸಚಿವರು ಎತ್ತಿ ತೋರಿಸಿದರು.
ಭವಿಷ್ಯದ ಚಲನಶೀಲ ತಂತ್ರಜ್ಞಾನಗಳಿಗೆ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಬೃಹತ್ ಕೈಗಾರಿಕೆ ಸಚಿವಾಲಯವು ಪ್ರಾರಂಭಿಸಿದ ಹಲವಾರು ಪ್ರಮುಖ ಉಪಕ್ರಮಗಳನ್ನು ಸಚಿವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ಬ್ಯಾಟರಿ ಸೆಲ್ ತಯಾರಿಕೆಗಾಗಿ ₹18,100 ಕೋಟಿ, ಪಿಎಲ್ ಐ ಎಸಿಸಿ ಯೋಜನೆ, ಇವಿ ಮತ್ತು ಹೈಡ್ರೋಜನ್ ಚಾಲಿತ ವಾಹನಗಳು ಸೇರಿ ಕ್ಲೀನರ್ ವಾಹನಗಳನ್ನು ಉತ್ತೇಜಿಸುವ ₹25,938 ಕೋಟಿ ಮೊತ್ತದ ಪಿಎಲ್ ಐ ಆಟೋ ಯೋಜನೆ ಮತ್ತು ಅಪರೂಪದ ಭೂಮಿಯ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿ, ಇತ್ತೀಚೆಗೆ ಪ್ರಾರಂಭಿಸಲಾದ ₹7,280 ಕೋಟಿ REPM ಯೋಜನೆ ಮುಂತಾದವನ್ನು ಸಚಿವರು ತಮ್ಮ ಭಾಷಣದಲ್ಲಿ ಪ್ರಸ್ತಾವನೆ ಮಾಡಿದರು.
ಪಿಎಂ ಇ ಡ್ರೈವ್ ಯೋಜನೆಯನ್ನು ಭಾರತದ ಇವಿ ರೂಪಾಂತರದ ಮೂಲಾಧಾರವೆಂದು ವಿವರಿಸಿದ ಬಣ್ಣಿಸಿದ ಸಚಿವರು, ₹10,900 ಕೋಟಿಗಳ ಈ ಯೋಜನೆಯು; ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಬಸ್ಸುಗಳು ಮತ್ತು ಟ್ರಕ್ಗಳ ಅಳವಡಿಕೆಯನ್ನು ವೇಗಗೊಳಿಸುತ್ತಿದೆ ಮತ್ತು ಅದೇ ಸಮಯದಲ್ಲಿ ದೇಶಾದ್ಯಂತ ದೃಢವಾದ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ದೇಶಾದ್ಯಂತ ಇವಿ ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯ ನಿಯೋಜನೆಗಾಗಿ ₹2,000 ಕೋಟಿಯನ್ನು ನಿರ್ದಿಷ್ಟವಾಗಿ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ಬೃಹತ್ ಕೈಗಾರಿಕಾ ಸಚಿವಾಲಯದ ಹೊಸ ಉಪಕ್ರಮದ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅವರು; ರಾಷ್ಟ್ರೀಯ ಏಕೀಕೃತ ಇವಿ ಚಾರ್ಜಿಂಗ್ ಅಪ್ಲಿಕೇಶನ್ – ಏಕೀಕೃತ ಭಾರತ್ ಇ-ಚಾರ್ಜ್ (ಯುಬಿಸಿ) ಕುರಿತು ಈಗಾಗಲೇ ವಿಸ್ತೃತವಾಗಿ ಕೆಲಸ ನಡೆಯುತ್ತಿದೆ ಎಂದರು.
ಇವಿ ಬಳಕೆದಾರರು ಒಂದೇ ವಿಶ್ವಾಸಾರ್ಹ ಇಂಟರ್ಫೇಸ್ ಮೂಲಕ ಬಹು ಆಪರೇಟರ್ಗಳ ಚಾರ್ಜಿಂಗ್ ನೆಟ್ವರ್ಕ್ಗಳಲ್ಲಿ ಅನ್ವೇಷಿಸಲು, ಪ್ರವೇಶಿಸಲು ಮತ್ತು ಪಾವತಿಸಲು ವೇದಿಕೆಯು ಗುರಿಯನ್ನು ಹೊಂದಿದೆ. ಯುಪಿಐನ ಡಿಜಿಟಲ್ ಪಾವತಿಗಳ ರೂಪಾಂತರಕ್ಕೆ ಅದರ ಸಂಭಾವ್ಯ ಪರಿಣಾಮವನ್ನು ಹೋಲಿಸಿದಾಗ, ಈ ಉಪಕ್ರಮವು ಭಾರತದ ಇವಿ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸುತ್ತದೆ ಎಂದು ಸಚಿವರು ಹೇಳಿದರು.
ದೇಶದಲ್ಲಿ ಇವಿ ಚಲನಶೀಲತೆಯ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಲು ಗ್ರಿಡ್ ಸಿದ್ಧತೆ, ಪ್ರಮಾಣೀಕರಣ ಮತ್ತು ಡಿಜಿಟಲ್ ಏಕೀಕರಣವನ್ನು ಖಚಿತಪಡಿಸಿಕೊಳ್ಳಲು ಬೃಹತ್ ಕೈಗಾರಿಕಾ ಸಚಿವಾಲಯವು ಇಂಧನ ಸಚಿವಾಲಯ, ರಾಜ್ಯ ಸರಕಾಗಳು ಮತ್ತು ಇನ್ನಿತರ ಕೈಗಾರಿಕೆಗಳ ಪಾಲುದಾರರೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.
