ಸಮಗ್ರ ಸುದ್ದಿ

ಫೋಕಸ್ ಆನ್ ನ್ಯೂಸ್ -2.0’ – ರಾಷ್ಟ್ರಮಟ್ಟದ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ

Share

ಬೆಂಗಳೂರು:ಕರ್ನಾಟಕ ಮಾಧ್ಯಮ ಅಕಾಡೆಮಿಯು ‘ಫೋಕಸ್ ಆನ್ ನ್ಯೂಸ್ -2.0’ (Focus on News – 2.0) ರಾಷ್ಟ್ರೀಯ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸರ್ಧೆಯನ್ನು ಹೆಮ್ಮೆಯಿಂದ ಘೋಷಿಸುತ್ತಿದೆ. ಇದು ಸಂಪೂರ್ಣವಾಗಿ ಫೋಟೋ ಜರ್ನಲಿಸಂ (ಛಾಯಾಚಿತ್ರ ಪತ್ರಿಕೋದ್ಯಮ) ಕಲೆ ಮತ್ತು ಅದರ ಪ್ರಭಾವಕ್ಕೆ ಮೀಸಲಾದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ.

2026ರ ಆಗಸ್ಟ್ 3 ಮತ್ತು 4 ರಂದು ಚಿತ್ರಕಲಾ ಪರಿಷತ್‍ನಲ್ಲಿ ನಡೆಯಲಿರುವ ಈ ಕಾರ್ಯಕ್ರಮವು, ಆಧುನಿಕ ಸುದ್ದಿ ಛಾಯಾಚಿತ್ರಗ್ರಹಣದ ನೈಜ ಶಕ್ತಿ, ನೈತಿಕತೆ ಮತ್ತು ಸತ್ಯದ ಮೇಲೆ ಗಮನಹರಿಸುತ್ತ, ಇತಿಹಾಸವನ್ನು ನೈಜ ಸಮಯದಲ್ಲಿ ಸೆರೆಹಿಡಿಯುವ ದೃಶ್ಯ ಕಥೆಗಾರರನ್ನು (visual storytellers) ಗೌರವಿಸುತ್ತದೆ.

ಅತ್ಯುತ್ತಮ ಪತ್ರಿಕಾ ಛಾಯಾಚಿತ್ರಗಳ ಪ್ರದರ್ಶನದ ಜೊತೆಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನೂ ಒಳಗೊಂಡಿದೆ. ಖ್ಯಾತ ರಾಷ್ಟ್ರೀಯ ಫೋಟೋ ಜರ್ನಲಿಸ್ಟ್ ಗಳು ಮತ್ತು ಹಿರಿಯ ಪತ್ರಕರ್ತರ ಸಂವಾದ ಕಾರ್ಯಕ್ರಮಗಳೂ ಇವೆ. ಪ್ರಮುಖ ಜಾಗತಿಕ ಕ್ಯಾಮರಾ ಬ್ರಾಂಡ್‍ಗಳು ಸುದ್ದಿ ಛಾಯಾಚಿತ್ರಗ್ರಹಣದ ಕುರಿತು ಎರಡು ವಿಶೇಷ ತಾಂತ್ರಿಕ ಕಾರ್ಯಾಗಾರಗಳನ್ನು ನಡೆಸಲಿವೆ. ಇವು ಉದ್ಯಮದ ಅತ್ಯಾಧುನಿಕ ಉಪಕರಣಗಳೊಂದಿಗೆ ಆಳವಾದ ತಾಂತ್ರಿಕ ಜ್ಞಾನ ಮತ್ತು ಮೌಲ್ಯಯುತವಾದ ಪ್ರಾಯೋಗಿಕ ತರಬೇತಿಯನ್ನು ಒದಗಿಸಲಿವೆ.

ಆಕರ್ಷಕ ಕಾರ್ಯಕ್ರಮದ ಮುಖ್ಯಾಂಶಗಳು:

ರಾಷ್ಟ್ರಮಟ್ಟದ ಸ್ಪರ್ಧೆ: ದೇಶದಾದ್ಯಂತದ ಅತ್ಯುತ್ತಮ ಛಾಯಾಚಿತ್ರಗಳ ಸ್ಪರ್ಧೆ ಇದಾಗಿದೆ. ಖ್ಯಾತ ತೀರ್ಪುಗಾರರು ಕ್ರಮವಾಗಿ 1ನೇ, 2ನೇ ಮತ್ತು 3ನೇ ಬಹುಮಾನಗಳನ್ನು (ರೂ. 35,000. ರೂ. 25,000 ಮತ್ತು ರೂ. 15,000) ಆಯ್ಕೆ ಮಾಡಲಿದ್ದಾರೆ.

ಕರ್ನಾಟಕ ವಿಶೇಷ ವಿಭಾಗ: 2025ರ ರಾಜ್ಯ ಛಾಯಾಚಿತ್ರ ಪ್ರದರ್ಶನದಿಂದ ಆಯ್ಕೆಯಾದ ಅತ್ಯುತ್ತಮ ಛಾಯಾಚಿತ್ರಗಳನ್ನು ಪ್ರದರ್ಶಿಸುವ ವಿಶೇಷ ಗ್ಯಾಲರಿ.

ಕ್ಯಾಮೆರಾ ವಿಕಸನ ಗ್ಯಾಲರಿ: ದಶಕಗಳ ಕಾಲ ತಂತ್ರಜ್ಞಾನದಲ್ಲಿನ ಬದಲಾವಣೆಗಳನ್ನು ಬಿಂಬಿಸುವ, ಹಿಂದೆಂದೂ ಕಾಣದಂತಹ ಅಪರೂಪದ ಹಳೆಯ (ವಿಂಟೇಜ್) ಮತ್ತು ಆಧುನಿಕ ಕ್ಯಾಮೆರಾಗಳ ಪ್ರದರ್ಶನ.

ನೇರ ಸಂವಾದಾತ್ಮಕ ಅಧಿವೇಶನಗಳು: ಪ್ರೇಕ್ಷಕರಿಗೆ ಖ್ಯಾತ ರಾಷ್ಟ್ರೀಯ ಛಾಯಾಗ್ರಾಹಕರು ಮತ್ತು ಅನುಭವಿ ತೀರ್ಪುಗಾರರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ.

ಆಸಕ್ತಿದಾಯಕ ಪ್ಯಾನಲ್ ಚರ್ಚೆ: “ಸುದ್ದಿಯತ್ತ ಗಮನ ಪೋಟೋ ಜರ್ನಲಿಸ್ಟ್‍ಗಳು: ಪ್ರತಿ ಚಿತ್ರಕ್ಕೂ ಹೊಸ ಆಯಾಮ” (Focus on News Photojournalists: Redefining Every Shot) 2 ಪ್ರಮುಖ ಚರ್ಚೆ.

ಸೆಲ್ಫಿ ಪಾಯಿಂಟ್: ಸಂದರ್ಶಕರು ಪ್ರದರ್ಶನದ ಅನುಭವದ ನೆನಪುಗಳನ್ನು ಸೆರೆಹಿಡಿಯಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ವಲಯ.
ವಿಶೇಷ ತಾಂತ್ರಿಕ ಕಾರ್ಯಾಗಾರಗಳು ಮತ್ತು ಪ್ರಾಯೋಗಿಕ ತರಬೇಥಿ ಅವಧಿಗಳು ಸಂಪೂರ್ಣವಾಗಿ ಉಚಿತವಾಗಿದ್ದು, ವೃತ್ತಪರ ಛಾಯಾಗ್ರಾಹಕರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಸುದ್ದಿ ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ಯಾರಿಗಾದರೂ ಮುಕ್ತವಾಗಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಮ್ ಅವರು “ಇದು ಅತ್ಯಂತ ಆಸಕ್ತಿದಾಯಕ ಕಾರ್ಯಕ್ರಮವಾಗಿದ್ದು, ಸುದ್ದಿ ಛಾಯಾಗ್ರಹಣದ ಕೌಶಲ್ಯವನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಒಂದು ಚಿತ್ರವು ಸಾವಿರ ಪದಗಳಿಗೆ ಸಮಾನ ಎಂಬ ಹಳೆಯ ನಾಣ್ಣುಡಿಯ ಸ್ಥಾನವನ್ನು ಈಗ ಒಂದೇ ಚೌಕಟ್ಟಿನಲ್ಲಿ ತರಲಾಗುತ್ತಿದೆ. ಸರ್ಕಾರದಿಂದ ನಾಮನಿರ್ದೇಶಿತರಾದ ಸದಸ್ಯರು ಹಾಗೂ ಹಿರಿಯ ಛಾಯಾ ಪತ್ರಕರ್ತ ವೆಂಕಟೇಶ್ ಅವರ ಅಮೂಲ್ಯ ಬೆಂಬಲದೊಂದಿಗೆ, ಅವರ ದೃಷ್ಟಿಕೋನ ಮತ್ತು ಲೆನ್ಸ್‍ನ ಮೂಲಕ ಅತ್ಯುತ್ತಮ ಚಿತ್ರಗಳನ್ನು ಯಶಸ್ವಿಯಾಗಿ ಸಂಯೋಜಿಸಲು ನಮಗೆ ಸಾಧ್ಯವಾಗಿದೆ.” ಎಂದು ವಿವರಿಸಿದರು.

ನೋಂದಣಿ ಮತ್ತು ಮಾಹಿತಿ: https://forms.gle/oFLsyZRKHHstumbH7 ಕಾರ್ಯಾಗಾರಕ್ಕೆ, ನೋಂದಣಿ ಲಿಂಕ್: ಅರ್ಹ ಅಭ್ಯರ್ಥಿಗಳು ಅಧಿಕೃತ ಕಾರ್ಯಾಗಾರ ನೋಂದಣಿ ನಮೂನೆಯ ಲಿಂಕ್ ಮೂಲಕ ತಕ್ಷಣವೇ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.

ಅಪ್‍ಡೇಟ್‍ಗಳು ಮತ್ತು ಪ್ರಕಟಣೆಗಳು: ಹೆಚ್ಚಿನ ವಿವರಗಳನ್ನು ನಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ನಿರಂತರವಾಗಿ ನೀಡಲಾಗುವುದು. ಇತ್ತೀಚಿನ ಮಾಹಿತಿಗಾಗಿ (real-time updates) ಈ ಪುಟವನ್ನು ಗಮನಿಸುತ್ತಿರಲು ಭೇಟಿ ನೀಡುವವರು ಮತ್ತು ಭಾಗವಹಿಸುವವರನ್ನು ಕೋರಲಾಗಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಕುರಿತು:

ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲಾದ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯು ಪತ್ರಿಕೋದ್ಯಮದ ಗುಣಮಟ್ಟವನ್ನು ಹೆಚ್ಚಿಸುವುದು, ಮಾಧ್ಯಮ ಸಂಶೋಧನೆ ಮತ್ತು ವೃತ್ತಿಪರ ತರಬೇತಿಯನ್ನು ಉತ್ತೇಜಿಸುವಲ್ಲಿ ಸಮರ್ಪಿತವಾದ ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ನಿಯಮಿತ ಕಾರ್ಯಾಗಾರಗಳು, ಪ್ರತಿಷ್ಠಿತ ರಾಜ್ಯಮಟ್ಟದ ಪ್ರಶಸ್ತಿಗಳು ಮತ್ತು ಮಾಧ್ಯಮ ವಿಚಾರಸಂಕಿರಣಗಳ ಮೂಲಕ, ಈ ಅಕಾಡೆಮಿಯು ಈ ಭಾಗದ ಪತ್ರಕರ್ತರು ಮತ್ತು ಮಾಧ್ಯಮ ವಿದ್ಯಾರ್ಥಿಗಳು ಶ್ರೇಷ್ಠತೆಯನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page