ಸಮಗ್ರ ಸುದ್ದಿ

ಮನೆ ಮನೆಗೆ ಇ ಸ್ವತ್ತು: ಈಶ್ವರ್ ಖಂಡ್ರೆ

Share

ಬೆಂಗಳೂರು: ಗ್ರಾಮೀಣ ಆಸ್ತಿಗಳಿಗೆ ಇ ಸ್ವತ್ತು ನೀಡಿಕೆಯಲ್ಲಿ ವಿಳಂಬವಾಗುತ್ತಿರುವುದನ್ನು ಪರಿಹರಿಸಿ, ಮನೆ ಮನೆಗೆ ಇಸ್ವತ್ತು ನೀಡುವ ಅಭಿಯಾನ ಆರಂಭಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ತಿಳಿಸಿದ್ದಾರೆ.

ಇ ಸ್ವತ್ತು ನೀಡಿಕೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು ಒಂದು ತಿಂಗಳಲ್ಲಿ ಇವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಂತ್ರಾಂಶದ ಸಮಸ್ಯೆ ಪರಿಹಾರವಾದ ಬಳಿಕ ಮುಂದಿನ ತಿಂಗಳಿಂದ ಮನೆ ಮನೆಗೆ ಇಸ್ವತ್ತು ನೀಡುವ ಯೋಜನೆ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದರು.


Share

You cannot copy content of this page