ಹುಬ್ಬಳ್ಳಿ: ಕ್ಯಾಸಲ್ ರಾಕ್ ಮತ್ತು ಕುಲೆಮ್ ನಡುವಿನ ಘಾಟ್ ಭಾಗದಲ್ಲಿ ಅತ್ಯಗತ್ಯವಾದ ಹಳಿ ನಿರ್ವಹಣಾ ಕಾಮಗಾರಿಗಾಗಿ ಲೈನ್ ಬ್ಲಾಕ್ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ರೈಲುಗಳನ್ನು ಬದಲಾದ ಮಾರ್ಗದಲ್ಲಿ ಸಂಚರಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಬದಲಾದ ಮಾರ್ಗಗಳಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಸಹ ಒದಗಿಸಲಾಗಿದೆ.
ಮೇ 2, 9, 16, 23, 30 ಮತ್ತು ಜೂನ್ 6, 2026 ರಂದು ಪುಣೆಯಿಂದ ಹೊರಡುವ ರೈಲು ಸಂಖ್ಯೆ 11097 ಪುಣೆ–ಎರ್ನಾಕುಲಂ ಪೂರ್ಣಾ ವೀಕ್ಲಿ ಎಕ್ಸ್ ಪ್ರೆಸ್ ಪುಣೆ, ಪನ್ವೇಲ್, ರೋಹಾ ಮತ್ತು ಮಡಗಾಂವ್ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ಘಟಪ್ರಭಾ, ಬೆಳಗಾವಿ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್ ಮತ್ತು ಸಾವರ್ಡೆಮ್ ನಿಲ್ದಾಣಗಳ ನಿಲುಗಡೆ ತಪ್ಪಿಸಿಕೊಳ್ಳಲಿದೆ. ಬದಲಾಗಿ ಚಿಪ್ಲೂನ್ ಮತ್ತು ರತ್ನಗಿರಿ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಕಲ್ಪಿಸಲಾಗಿದೆ.
ಏಪ್ರಿಲ್ 27, ಮೇ 4, 11, 18, 25 ಮತ್ತು ಜೂನ್ 1, 2026 ರಂದು ಎರ್ನಾಕುಲಂನಿಂದ ಹೊರಡುವ ರೈಲು ಸಂಖ್ಯೆ 11098 ಎರ್ನಾಕುಲಂ–ಪುಣೆ ಪೂರ್ಣಾ ವೀಕ್ಲಿ ಎಕ್ಸ್ಪ್ರೆಸ್ ಮಡಗಾಂವ್, ರೋಹಾ, ಪನ್ವೇಲ್ ಮತ್ತು ಪುಣೆ ಮಾರ್ಗವಾಗಿ ಸಂಚರಿಸಲಿದೆ. ಈ ಅವಧಿಯಲ್ಲಿ ರೈಲು ಸಾವರ್ಡೆಮ್, ಕುಲೆಮ್, ಕ್ಯಾಸಲ್ ರಾಕ್, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್ ಮತ್ತು ಸತಾರಾ ನಿಲ್ದಾಣಗಳನ್ನು ಕೈಬಿಡಲಿದ್ದು, ರತ್ನಗಿರಿ ಮತ್ತು ಚಿಪ್ಲೂನ್ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಒದಗಿಸಲಾಗಿದೆ.
ಮೇ 4, 11, 18, 25 ಮತ್ತು ಜೂನ್ 1, 2026 ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ಸಂಖ್ಯೆ 17315 ವಾಸ್ಕೋ-ಡ-ಗಾಮಾ–ವೇಲಂಕಣ್ಣಿ ವೀಕ್ಲಿ ಎಕ್ಸ್ ಪ್ರೆಸ್ ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರ್ ಮತ್ತು ಈರೋಡ್ ಮಾರ್ಗವಾಗಿ ಚಲಿಸಲಿದೆ. ಇದರಿಂದಾಗಿ ಈ ರೈಲು ಸಾವರ್ಡೆಮ್, ಕುಲೆಮ್, ಕ್ಯಾಸಲ್ ರಾಕ್, ಲೋಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಚಿಕ್ಕಬಾಣಾವರ, ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರ, ಬಂಗಾರಪೇಟೆ ಮತ್ತು ಸೇಲಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಕಾರವಾರ, ಕುಂದಾಪುರ ಮತ್ತು ಉಡುಪಿ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಒದಗಿಸಲಾಗಿದೆ.
ಏಪ್ರಿಲ್ 28, ಮೇ 5, 12, 19, 26 ಮತ್ತು ಜೂನ್ 2, 2026 ರಂದು ವೇಲಂಕಣ್ಣಿಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಂಕಣ್ಣಿ–ವಾಸ್ಕೋ-ಡ-ಗಾಮಾ ವೀಕ್ಲಿ ಎಕ್ಸ್ ಪ್ರೆಸ್ ಈರೋಡ್, ಶೋರನೂರ್, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ಮೂಲಕ ಸಂಚರಿಸಲಿದೆ.
ಈ ಅವಧಿಯಲ್ಲಿ ರೈಲು ಸೇಲಂ, ಬಂಗಾರಪೇಟೆ, ಕೃಷ್ಣರಾಜಪುರ, ಎಸ್ಎಂವಿಟಿ ಬೆಂಗಳೂರು, ಬಾಣಸವಾಡಿ, ಚಿಕ್ಕಬಾಣಾವರ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ರಾಣಿಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್ ಮತ್ತು ಸಾವರ್ಡೆಮ್ ನಿಲ್ದಾಣಗಳನ್ನು ಕೈಬಿಡಲಿದ್ದು, ಉಡುಪಿ, ಕುಂದಾಪುರ ಮತ್ತು ಕಾರವಾರ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಕಲ್ಪಿಸಲಾಗಿದೆ.
